Tuesday, January 15, 2019

            ಮುಖವಾಡದ ಉದಾರತೆ.(ಸ್ವರಚಿತ)

ಉದಯಿಸುವುದು ವೈಚಾರಿಕತೆ
ಹಲವರ ಮನದಂಗಳದಿ
ಸಾಂಪ್ರದಾಯಿಕ ಆಚ್ಛಾದನವ ತಳೆದು
ವೇದಿಕೆಗಳನೇರಿ..ಧೀರತ್ವದಿ ನಿಂತು..
ಧರಿಸಿ ಮುಖವಾಡಗಳ ಉಸುರುವರು
"ಯತ್ರನಾರ್ಯಸ್ತು ಪೂಜ್ಯಂತೇ ರಮಂತೇ ತತ್ರದೇವತಾಹ"
ಮಾತಿನ ಮಧ್ಯದಲಿ ಹೇಳುವರು
'ಸ್ತ್ರೀಮೂಲ'ಸರ್ವತೊಂದರೆಗೆ..
ಸರ್ವಾಪರಾಧಗಳ ಕೇಂದ್ರವವಳು..
ಸುಮ್ಮನೊಮ್ಮೆ ಆಲೋಚಿಸಿದೆ..
ಸೂತ್ರದ ಪಟವಿಡಿದು ಆಡಿಸುವ
ಆಟ ನಿಂತಿಲ್ಲವೇಕೆಂದು...?
'ಸ್ತ್ರೀ'ಮೂಲದ ಲಗಾಮು..
ಪುರುಷ ಹಸ್ತದಲ್ಲಲ್ಲವೇನು?
ಎಲ್ಲಿಯ ವೈಚಾರಿಕತೆ.?
ಎತ್ತಣದುದಾರತೆ..
ಹುಡುಕಿದಷ್ಟೂ ಅರಸುವಿಕೆ..ಬರಿಹೋಳು.
ಬಯಸಿದಷ್ಟೂ ನಿರಾಸೆ..ಹಾಗಾದರೆ
ಹೊಸ ಮನ್ವಂತರವೆಂದಿಗೆ...???

No comments:

Post a Comment